Rudra devara suladhi(Vadirajaru)

ರುದ್ರದೇವರ ಸುಳಾದಿ – ವಾದಿರಾಜರು

ಧ್ರುವತಾಳ
ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ-
ಯಂಬಕನ ಗೌರಿಯರಸನ ತುತಿಸುತಿದಕೊ
ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ
ಸಂಭ್ರಮದಿಂದ ಗಂಗೆ ಗರ್ವಿಸುವಳು
‘ಡಂಭ ಏಕೋರುದ್ರನದ್ವಿತೀಯವದನ್ತೌ’
ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ-
ಡಂಬಡದು ವಿಷ್ಣುವೆಂಬವತಾರ ಮೂಲರೂಪ
ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ
ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’
ಯೆಂಬ ಹಿರಿಯರ ಮತವ ಸುಮತವೆಂದು
ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ
ಅಂಬುಜಾಕ್ಷ ಹಯವದನ ಅಖಿಳರೊಡೆಯ ||1||

ಮಠ್ಯತಾಳ
ಆರು ಪುರಾಣ ಗೌರಿಯ ಗಂಡನವು ಮ-
ತ್ತಾರು ಪುರಾಣ ಚತುರಮುಖನವು
ಆರು ಪುರಾಣ ಹಯವದನನವು
ತೋರೊ ಸಾಂಬಶಿವನ ಪುರಾಣವ
ಭಾರತ ಪುರಾಣದೊಳಗಿಲ್ಲದ ಕಾರಣ ಶಶಶೃಂಗ ನಿನ್ನ ಶಿವ ||2||

ತ್ರಿಪುಟತಾಳ
ಕೈಲಾಸ ರುದ್ರನದು ವೈಕುಂಠಲೋಕ ನಮ್ಮ
ಶ್ರೀಲೋಲನಿಹಲೋಕ ಜಲಜಸಂಭವನಿಗೆ
ಮೂಲೋಕವಲ್ಲದೆ ಮೇಲಿನ ಸತ್ಯಲೋಕ
ಪೇಳೊ ನಿನ್ನ ಸಾಂಬಶಿವನ ಲೋಕ
ಖೂಳಜನರೊಡನಾಡದಿರು ದುರುಕ್ತಿಯನು ಬಿಡು
ಸಾರೊ ಸಜ್ಜನ ಕುಲದೈವ ಹಯವದನನ್ನ
ಆಳಾಗಿ ಬದುಕು ಶ್ರೀಹರಿ ಸರ್ವೋತ್ತಮನೆಂಬ
ಸಾರಮತವನು ಸೇವಿಸು ಮನುಜ ||3||

ರೂಪಕತಾಳ
ಶ್ರುತಿ ಪುರಾಣದೊಳಿಲ್ಲದ ಕ್ಷಿತಿಯೊಳರ್ಚನೆಗಲ್ಲದಾ-
ದಿತಿ ದೇವಕ್ಕಳೊಲ್ಲದ ಮತಿವಂತರ[ಮುಂದೆ]ನಿಲ್ಲದ
ಮತವಿದ್ಯಾತಕೊ ಸಲ್ಲದು ನಮ್ಮ
ಗತಿ ಹಯವದನ ಬಲ್ಲಿದ ||4||

ಝಂಪೆತಾಳ
ಪರಶಿವ ನಿರಾಕಾರನಾದಡೆ ನಿರ್ಗುಣ ಬೊಮ್ಮ
ಹರಶಿವಾದಿ ಪೆಸರು ಪಂಚಮುಖನಿಗಲ್ಲದೆ ಸಲ್ಲ
ಶರೀರವೆರಸಿದಡೆ ಜನ್ಮ ಮರಣಗಳು ಬಿಡವು ನಿನ್ನ
ದುರುತ್ಸಹ ಬರಿದೆ ಹೋಯಿತು
ಪರಶಿವ ಪರದೇವನೆಂದು ವಾಸುದೇವಗೆ ಸಾ-
ಸಿರನಾಮದೊಳಿದ್ದ ಕಾರಣ ಪರಶಿವನವನೆ
ಪೆರತೊಬ್ಬ ಶಿವನಿಲ್ಲ ಪರಾತ್ಪಪರ ನಮ್ಮ
ಸಿರಿದೇವಿಯರಸ ಹಯವದನ ಕಾಣೊ ||5||

ರೂಪಕತಾಳ
ತ್ರಯತ್ರಿಂಶದ್ವೈದೇವಾ ಸೋಮಪಾ-ಯೆಂದು
ಪ್ರಿಯಾತ್ಪ್ರಿಯಧಾಮ ಮೂವರು ಜೀವರು ನಿ-
ಶ್ಚಯಿಸಿ ಪೇಳಿದ ಕಾರಣದಿ ಇನ್ನೊಂದು
ಹೆದ್ದೈವ ಮತ್ತೆಲ್ಲಿಹುದೊ
ನ್ಯಾಯವೆಲ್ಲಿಹುದೊ ಪೇಳೆಲೊ ಕುವಾದಿ
ನ್ಯಾಯಕೋವಿದರೊಳು ಶ್ರೀ
ಹಯವದನನ ಬೊಮ್ಮ ಶಿವರೆಂಬೊ ಈ
ನ್ಯಾಯವು ತಪ್ಪದು ಇನ್ನೊಬ್ಬರೊಪ್ಪರೊ ||6||

ಜತೆ
ಹಯವದನನೇಗತಿ ಹಯವದನನೇ ಪತಿ
ಹಯವದನನೇ ಸುರಪತಿ ಸುರಾಸುರರುಗಳಿಗೆ

Leave a Reply

Your email address will not be published. Required fields are marked *