Category «ಸತ್ಯ ಘಟನೆಗಳು»

ಬಾವಿಯ ನೀರನ್ನು ಸಿಹಿಯಾಗಿಸಿದ ಸುಶಮೀಂದ್ರರು

ಶ್ರೀಹರಿವಾಯುಗುರುಭ್ಯೋ ನಮಃ ಶ್ರೀಸುಶಮೀಂದ್ರಯತೀಶ್ವರೋ ನ್ಯಾಸಮಣಿಃ ವಿಜಯಂ ದದ್ಯಾನ್ಮಮ 2001ರ ವರ್ಷದ ಏಪ್ರಿಲ್ ತಿಂಗಳದು. ಮಂತ್ರಾಲಯದಲ್ಲಿ ನೀರಿನ ಬಹಳ ತೀವ್ರವಾದ ಸಮಸ್ಯೆಯು ಪ್ರಾರಂಭವಾಗಿತ್ತು. ಮಠದಲ್ಲಿ ಹಿಂದೆ ಯಾವುದೋ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದನ್ನು ಪೂಜ್ಯ ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಮತ್ತೆ ತೆಗೆಸುವ ಆಲೋಚನೆಯನ್ನು ಮಾಡಿದರು. ಆಗ ಮಠದ ಅನುಭವಿಗಳೊಂದಿಬ್ಬರು “ಆ ಬಾವಿಯನ್ನು ತೆಗೆಸುವುದು ಬೇಡ” ಎಂಬ ಸಲಹೆಯನ್ನಿತ್ತರು. ವಾಸ್ತು ದೋಷದಿಂದಾಗಿ ಅದನ್ನು ಮುಚ್ಚಲಾಗಿತ್ತು ಎಂದು ಅವರು ಕಾರಣವನ್ನಿತ್ತರು. ಆದರೆ ಶ್ರೀಗಳವರು “ಈ ನೀರಿನ ಸಮಸ್ಯೆಯು ಈ ವರ್ಷಕ್ಕೆ ಮಾತ್ರ ಬಂದಿಲ್ಲ. ಇನ್ನು …