ಶ್ರೀಗೋಪಾಲದಾಸರ-ಆರಾಧನೆ

Sri Gopala Dasaru

ಶ್ರೀಗೋಪಾಲದಾಸರ ಆರಾಧ್ಯ ದೈವ ಶ್ರೀವಿಜಯವಿಠ್ಠಲ ದೇವರು

  • Period : 1722 – 1762
  • Name : Bhaganna
  • Ankitha : Gopala Vittala
  • Upadesha Guru :  Sri Vijaya Dasaru
  • Aradhana Tithi :  Pushya Bahula Astamee
  • Place : Uttanooru

ಶ್ರೀ ಗೋಪಾಲದಾಸರು

ಕಾಲ ಕ್ರಿ. ಶ. 1722 – 1762
ಹೆಸರು ಭಾಗಣ್ಣ
ಪುಣ್ಯ ತಿಥಿ ಪುಷ್ಯ ಬಹುಳ ಅಷ್ಟಮೀ
ಅಂಕಿತ  ಗೋಪಾಲವಿಠ್ಠಲ
ಉಪದೇಶ ಗುರುಗಳು ಶ್ರೀವಿಜಯದಾಸರು
ಸ್ಥಳ ಉತ್ತನೂರು

 

ಆಗತಾದ್ರಿ ತ್ರಿಕಾಲಜ್ಞಂ ಆಗಮಾರ್ಥ ವಿಶಾರದಂ ।
ತ್ಯಾಗ ಭೋಗ ಸಮಾಯುಕ್ತಂ ಭಾಗಣ್ಣಾರ್ಯ ಗುರುಂಭಜೇ ।।

आगताद्रि त्रिकालज्ञं आगमार्थ विशारदं ।
त्याग भोग समायुक्तं भागण्णार्य गुरुंभजे ॥

AgatAdri trikAlaj~jaM AgamArtha viSAradaM |
tyAga BOga samAyuktaM BAgaNNArya guruMBajE ||

=======================================================
ಗೋಪಪ್ರಖರ ಸಂಕಾಶಂ – ಗೋಪಾಲಾರ್ಚನ ತತ್ಪರಂ |
ಗೋದೇವ ವಂದ್ಯಪಾದಾಬ್ಜಂ – ಗೋಪಾಲಾಖ್ಯ ಗುರುಂ ಭಜೇ ||

गोपप्रखर संकाशं – गोपालार्चन तत्परं ।
गोदेव वंद्यपादाब्जं – गोपालाख्य गुरुं भजे ॥

gOpapraKara saMkASaM – gOpAlArcana tatparaM |
gOdEva vaMdyapAdAbjaM – gOpAlAKya guruM BajE ||

Inline image 1
(Sri Gopala Dasaru’s house  – ಶ್ರೀಗೋಪಾಲದಾಸರ ಮನೆ)

Life of Sri Bhaganna :

Bhaganna lived along with his three brothers with his mother Venkamma,since his father had expired exposing them to great difficulties. An accounts officer of a neighbouring village arranged for the thread ceremony of the children free of cost and the priest who conducted the function emphasised the power of gayatri.

Bhaganna took the adivce to the heart and formally took permisssion from greatest god for a person viz. his mother started to sincerely chant the greatest mantra gayatri and by the repeated chanting and purascharanah of the sacred hymn for a period of two years under a vata vraksha(banyan tree)Bhaganna was endowed with the gift of telling the bhoota,vartamanah and bhavishya of a person(the past,present and future). Fame,name,glory and riches began to pour upon Bhagannaa who was languishing in penury previously. Even the Gadwal king came to him and got prediction from him and gifted with him with lot  of wealth.

Bhaganna to become Gopala Dasaru:

A dramatic change took place in his life when bhaganna happened to go to see thimanna at adoni (thimannan was a minister at the court of baslad jung,nawab of adoni and a good friend of bhaganna) . At that time Sri Vijayadaasaru had camped there and Bhaganna  was captivated by the great saint  and Bhaganna left the practice of foretelling and fell  at the Lotus feet of the dasaru and requested him to kindly initiate into daasa koota which the  latter did so  in the manga rayara devastana at adoni and gave him the ankhita name of Gopala vittala and henceforth He was known as Sri Gopala Dasaru.

Gopala dasa was a great Haridasa,who gave 40 years of his life to Sri Jagannatha Dasa, as per orders of Sri Vijayadasa. He has composed thousands of Suladhis, Ugabhogas. His dasarapadha extols the Supremacy of  Lord Sri Hari strongly and proved Sri Madhva siddhanta to such a great extent.Its commonly believed that Sri Gopala Dasaru is an amsha of Sri Ganesha.

ಶ್ರೀಗೋಪಾಲದಾಸ ಕೃತ ಶ್ರೀರಾಘವೇಂದ್ರ ಸುಳಾದಿ

ರಾಗ – ಭೈರವಿ ಧ್ರುವ ತಾಳ
ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು|
ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ|
ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ|
ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ|
ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ|
ಪರಿಸಿದ್ಧ(ಪ್ರಸಿದ್ಧ)ನಾದನೆಂದು ಅರಿದು ಈ ಸ್ಥಳದಲ್ಲಿ|
ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ|
ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು|
ಸಿರಿಕೃಷ್ಣನ್ನ ಚರಣಕ್ಕೇರಗಿ ಸಂತೋಷದಲ್ಲಿ |
ಧರೆಯಮ್ಯಾಲಿದ್ದ ಜನರ ಪೋರೆಯ ಬೇಕೆಂದೆನುತ|
ಹರಿ ನುಡಿದನು ಇವರ ಪರಮ ದಯಾಳು ತಾನು|
ಗುರ್ವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೇ|
ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು|
ಸಿರಿವುಳ್ಳ ಕೀರುತಿಯ ಸುರರಪಾಲಕ ಚಕ್ರ|
ಧರ ನಾರಾಯಣ ತಾನೆ ವರಸನ್ನಿಧಾನನಾಗಿ|
ಇವರಿಗೆ ಫಲತಂದೀವ ಇಹಪರದಲ್ಲಿನ್ನು
ಕರುಣಾಕರ ರಂಗ ಗೋಪಾಲ ವಿಠ್ಠಲ ತನ್ನ|
ಶರಣರ ಪೋರೆವಂಥ ಚರಿಯಾ ಪರಿಪರಿ ಉಂಟೊ|| 1 ||

ಮಟ್ಟ ತಾಳ
ನರಹರಿ ಕೃಷ್ಣ ರಾಮ ಸಿರಿ ವೇದವ್ಯಾಸ |
ಎರಡೆರಡು ನಾಲ್ಕು ಹರಿಯ ಮೂರ್ತಿಗಳು |
ಪರಿವಾರ ಸಹವಾಗಿ ಸಿರಿ ಸಹಿತದಿ ನಿಂದು |
ಸುರ ಗುರುವರ್ಯರು ಮಧ್ವಾಚಾರ್ಯರೆ ಮೊದಲಾಗಿ |
ತರುವಾಯದಲಿನ್ನು ತರತಮ್ಯಾನುಸಾರ |
ಪರಿ ಪರಿ ಯತಿಗಳು ಇರುತಿಪ್ಪರು ಇಲ್ಲಿ |
ಹರುಷದಿಂದಲಿ ವೇದಗರೆದು ಶಾಸ್ತ್ರಗಳನ್ನು |
ಪರಿ ಪರಿ ಪುರಾಣ ಭಾರತ ಗಾನದಲಿ |
ಸರಿ ಸರಿ ಬಂದಂತೆ ಸರಿಗಮವೆನುತಲಿ |
ಭರದಿಂದಲಿ ಕುಣಿದು ಭಕುತಿಯಿಂದಲಿ ಇನ್ನು |
ಹರಿಯ ಪೂಜಿಸುತ್ತ ಹಗಲಿರುಳು ಬಿಡದೆ |
ಪರತತ್ವದ ವಿವರ ಪರಿಪರಿ ಪೇಳುವರು |
ಗರುಡವಾಹನ ರಂಗ ಗೋಪಾಲ ವಿಠ್ಠಲ |
ಶರಣರ ಪಾಲಿಸುತ ಇರುತಿಪ್ಪನು ಇಲ್ಲಿ || 2 ||

ತ್ರಿವಿಡಿ ತಾಳ
ನರಹರಿ ರೂಪದಲ್ಲಿ ವಾಸವಾಗಿ ಇಲ್ಲಿ |
ದುರಿತ ದುಷ್ಕೃತ ಬ್ರಹ್ಮೇತಿಗಳೋಡಿಸುವ |
ಸಿರಿ ರಾಮನಾಗಿ ಇಲ್ಲಿ ಪರಿ ಪರಿ ಪರಿ ದೇಶಾಂ-|
ತರ ಅನ್ನ ಕಳಕೊಂಡು ನರರಿಲ್ಲಿ ಬಂದರೆ |
ಸ್ಥಿರ ಪಟ್ಟ ಕಟ್ಟುವ ಸಿರಿ ಕೃಷ್ಣನಾಗಿಲ್ಲಿ |
ಪರಿ ಪರಿಯಲಿ ಬಂದ ಪರಮಾತುರರಿಗೆ |
ವರವೀವ ಪುತ್ರೋತ್ಸವ ಮುಂಜಿ ಮದುವೆಯ |
ಹರಕೆಗಳ ಕೈಕೊಂಡು ಹರುಷ ಬಡಿಸುವವರ |
ಸಿರಿ ವೇದವ್ಯಾಸನಿಲ್ಲಿ ಭರದಿಂದಲಿ ಬಂದ |
ದುರುವಾದಿಗಳನೆಲ್ಲ ಧುರದಿಂದಲೋಡಿಸಿ |
ಮುರಿದು ಅವರ ಶಾಸ್ತ್ರ , ಹರಿ ಸರ್ವೋತ್ತಮನೆಂದು |
ಇರುವನಿಲ್ಲಿ ತೋರಿ ಶರಣ ಜನಕ ಇನ್ನು |
ವರ ಜ್ಞಾನ ಸುಧೆಯನ್ನು ಕರೆದು ಕೊಡುತಲಿಪ್ಪ |
ಸಿರಿ ವಂದಿತ ಪಾದ ಗೋಪಾಲ ವಿಠ್ಠಲ |
ಪರಿ ಪರಿಯಲಿ ಇಲ್ಲಿ ವಾಲಗ ಕೈಕೊಂಬ || 3 ||

ಅಟ್ಟತಾಳ
ರಾಘವೇಂದ್ರನೆಂಬೋ ರೂಪ ತಾನೇ ಆಗಿ |
ರಾಘವೇಂದ್ರನೆಂಬೋ ನಾಮ ಇಡಿಸಿಕೊಂಡು |
ರಾಘವೇಂದ್ರರಿನ್ನು ಮಾಡಿದಂಥ ಪುಣ್ಯ |
ಭೋಗವರಿತು ತನ್ನ ಭಾಗವತರ ಕೀರ್ತಿ |
ಸಾಗಿಸಿ ಸಲಹಲಿ ತ್ರಿಜಗದೊಳಗಿನ್ನು |
ಮೇಘ ಸುರಿದಂಥ ಅಮೋಘ ಕೀರುತಿಯನ್ನು |
ರಾಘವ ಇವರಿಗೆ ರಾಜ್ಯದಿ ತಂದೀವ |
ರಾಘವೇಂದ್ರ ಮೂರ್ತಿ ಗೋಪಾಲ ವಿಠ್ಠಲ |
ಭಾಗವತರಲ್ಲಿ ಬಹು ಪೂಜೆಯನುಗೊಂಬ || 4 ||

ಆದಿ ತಾಳ
ದಿನದಿನಕಿಲ್ಲಿ ನೂತನ ಪೂಜೆಗಳಾಗುವವು |
ದಿನದಿನಕಿಲ್ಲಿ ನೂತನ ವಾರ್ತೆಗಳಾಗುವವು |
ದಿನದಿನಕಿಲ್ಲಿ ನೂತನೋತ್ಸವಗಳಾಗುವವು |
ಜನರ ಸಂದಣಿ ಪ್ರತಿದಿನ ವಿಪ್ರ ಭೋಜನ |
ಜನನಾಥ ತಾನಿಲ್ಲಿ ಅನುವಾಗಿ ತಾನಿಂದು |
ಘನ ಮಹಿಮೆಯಿಂದಲಿ |
ಜನರ ಪಾಲಿಸುವದಕ್ಕನುಮಾನ ಸಲ್ಲದೊ |
ಗುಣ ಗಣ ಪರಿಪೂರ್ಣ ಗೋಪಾಲ ವಿಠ್ಠಲ |
ಅನೋರಣಿ ಎಂಬುವಗೆ ಎಣೆಯಾರೊ ಜಗದೊಳಗೆ || 5 ||

ಜತೆ
ಮಂತ್ರಸಿಧ್ಧಿ ಕ್ಷೇತ್ರ ಇದು ನೋಡಿ ಕೋವಿದರು |
ಮಂತ್ರ ಪ್ರತಿಪಾದ್ಯ ಗೋಪಾಲ ವಿಠ್ಠಲನಿಂದ || 6 ||

======================================================================
ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವ||
ಸಡಗರದಿಂದ ಮೆಲ್ಲಡಿಯನಿಡುತ ಬೇಗ
ಎಡಬಲದಲಿ ನಿನ್ನ ಮಡದಿಯರೊಡಗೂಡಿ
ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು ||

ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ
ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ
ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ
ಮಜಬಾಪುರೆ ಎನಲು ತ್ರಿಜಗವು ತಲೆದೂಗೇ
ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ
ಗಜಮುಖನಯ್ಯ ನಿಜಾನಂದದಲಾಡೆ
ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ
ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು||

ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ ,
ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ
ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ
ಶಿಕ್ಷಿಸಿ, ಸುಜನರ ರಕ್ಷಿಸಿ ಮೆರೆದಯ್ಯಾ
ತಕ್ಷಕ ನರನನು ಭಕ್ಷಿಸಬರುತಿರೆ ಈಕ್ಷಿಸಿ ತಕ್ಷಣ
ರಥನೆಲಕ್ಕೊತ್ತಿದೆ, ಲಕ್ಷೀಶನೆ ಅಕ್ಷಯ ಫಲದಾಯಕ
ಕುಕ್ಷಿಯೊಳಗೆ ಜಗರಕ್ಷಿಪ ವಿಶ್ವನೇ…..||ನಡೆದು ಬಾರಯ್ಯ||

ಮನಕೆ ಬಾರಯ್ಯ , ಸುಧಾಮನ ಸಖಹರಿಯೆ
ಸೋಮನ ಧರಿಸಿದವನೆ ,ಮನ ಕುಮುದಕೆ
ಚಂದ್ರಮನೆ ಕೇಳು ಎನ್ನ ದುಮ್ಮನವನೆ ಪರಿಹರಿಸಿ
ಒಮ್ಮನ ಕೊಡು ಅಹಿಗಿರಿ ತಿಮ್ಮನೆ ಕೇಳೊ ಬಿನ್ನಪಾ
ಕೊಂಬು ಕಹಳೆಗಳು ಬೊಂಬೋರಿಡುತಿರೆ
ತುಂಬುರು ನಾರದ ಇಂಪಾಗಿ ಪಾಡಲು
ಅಂಭರದಲಿ ವಾದನ ತುಂಬಿ ಧಿಮಿಕ್ಕೆನ್ನೆ
ಸಂಭ್ರಮದಲಿ ಬಾರೊ ಶಂಭು ವಂದಿತನೆ ನಡೆದೂ….||

ಪರಿಪರಿ ಬಗೆಯಿಂದ ಕರವ ಮುಗಿದು ಸ್ತುತಿಸಿ
ಕರೆದರೆ ಬಾರದೆ ಗರ್ವವು ಯಾಕೊ
ಕರಿಯ ಮೊರೆಯ ಕೇಳಿ, ಸಿರಿಗೆ ಹೇಳದೆ ಬಂದೆ
ಕರಿರಾಜ ಅವನಿನ್ನ ಹಿರಿಯಪ್ಪನ ಮಗನೇನೊ
ಶರಣಾಗತರಕ್ಷಕ ಮಣಿ ಎಂಬುವ
ಬಿರುದು ಬೇಕಾದರೆ ,ಸರಸರ ಬಾರಯ್ಯ,
ಗರುಡ ಗಮನ ಗೋಪಾಲ ವಿಠ್ಠಲರಾಯ
ಕರುವಿನಮೊರೆಗಾವು ನೆರೆದಂತೆ ಪೊರೆಯೊ ||

Leave a Reply

Your email address will not be published. Required fields are marked *